`ಚಾರ್‌ಮಿನಾರ್ಗೆ` ಬಿರುಸಿನ ಚಿತ್ರೀಕರಣ
Posted date: 27 Wed, Jun 2012 ? 08:38:29 AM

ಶ್ರೀಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎಸ್.ಮಂಜುನಾಥ್ ಹಾಗೂ ಗುಡಿಬಂಡೆ ನಾಯ್ಡು ಅವರು ನಿರ್ಮಿಸುತ್ತಿರುವ ‘ಚಾರ್‌ಮಿನಾರ್ ಚಿತ್ರಕ್ಕೆ ದ್ವಿತೀಯ ಹಂತದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸಕಲೇಶಪುರ, ಶ್ರೀರಂಗಪಟ್ಟಣ, ಮೈಸೂರು, ಹೇಮಗಿರಿ ಮುಂತಾದ ಕಡೆ ಇಪ್ಪತ್ತೈದು ದಿನಗಳ ಕಾಲ ಮಾತಿನ ಭಾಗದ ಚಿತ್ರೀಕರಣ ನಡೆಯಲಿದೆ. ಹೇಮಗಿರಿ ಹಾಗೂ ಶ್ರೀರಂಗಪಟ್ಟಣದಲ್ಲಿ ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಅವರು ವಿಭಿನ್ನ ಸೆಟ್ ಹಾಕಿದ್ದಾರೆ.    
    ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಹರಿ ಸಂಗೀತ ನೀಡಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಥ್ರಿಲ್ಲರ್‌ಮಂಜು ಸಾಹಸ ನಿರ್ದೇಶನ ಹಾಗೂ ಇಮ್ರಾನ್, ಹರ್ಷ, ರಘು ನೃತ್ಯ ನಿರ್ದೇಶನವಿರುವ  ‘ಚಾರ್‌ಮಿನಾರ್  ಚಿತ್ರದ ನಾಯಕರಾಗಿ ಲವ್ಲಿಸ್ಟಾರ್ ಪ್ರೇಮ್ ಅಭಿನಯಿಸುತ್ತಿದ್ದಾರೆ. ಮೇಘನಾ, ಕುಮುದ ನಾಯಕಿಯರಾಗಿರುವ ಈ ಚಿತ್ರದ ತಾರಾಬಳಗದಲ್ಲಿ ರಂಗಾಯಣ ರಘು, ಸಾಧುಕೋಕಿಲಾ, ಬುಲೆಟ್ ಪ್ರಕಾಶ್, ವಿದ್ಯಾಮೂರ್ತಿ,  ಪದ್ಮಿನಿಪ್ರಕಾಶ್, ಸುಧಾ ಬೆಳವಾಡಿ, ಹೊನ್ನವಳ್ಳಿ ಕೃಷ್ಣ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed